ಆತ್ಮ ಸಂಘರ್ಷ 1775 ನೇ ಇಸವಿ . ವರದಪ್ಪ ನಾಯಕರ ಆಳ್ವಿಕೆಯ ಕಾಲ . ಈ ವರ್ಷದ ದೀಪಾವಳಿಗೆ ವರದಪ್ಪ ನಾಯಕರ ಆಳ್ವಿಕೆ ಶುರುವಾಗಿ ಹದಿನೈದು ವರ್ಷಗಳು ಸಲ್ಲುತ್ತವೆ . ನ್ಯಾಯ ನೀತಿ ಆಡಳಿತ ಪ್ರಜಾಚಿಂತನೆಯಲ್ಲಿ , ಅನ್ಯಾಯವನ್ನು ಶಿಕ್ಷಿಸುವುದರಲ್ಲಿ ನಮ್ಮ ವರದಪ್ಪ ನಾಯಕರು ಹೆಸರುವಾಸಿ . ಊರಿನ ಜನರು ಕಾಣದ ದೇವರುಗಳನ್ನೆಲ್ಲ ಮರೆತು ನಮ್ಮ ನಾಯಕರನ್ನೇ ದೇವರೆಂದು ಪೂಜಿಸುತ್ತಾರೆ . ಇವರ ಆಳ್ವಿಕೆ ಶುರುವಾದ ನಂತರ ನಮ್ಮೂರ ಹೆಸರು ವರದಕೋಟೆ ಅಂತಲೇ ಬದಲಾಗಿ ಹೋಯ್ತು . ಅರ್ಥಶಾಸ್ತ್ರ ಪ್ರವೀಣ , ಕಲಾಸೇವಕ , ಪಂಡಿತರುಗಳ ಪ್ರೋತ್ಸಾಹಕ , ಅಬಲರ ಬಲ , ಶತ್ರು ಪಡೆಯ ಸಿಂಹಸ್ವಪ್ನ ಇದೆಲ್ಲವನ್ನು ಮೀರಿ ತನ್ನ ಸ್ವಂತ ಮಗನಂತಿದ್ದ ತನ್ನ ತಮ್ಮನ ಮಗ ...